Sunday 18 October 2015

ರಂಗಿತರಂಗ


 
ರಂಗಿತರಂಗ
ನಿರ್ದೇಶನ ಅನೂಪ್ ಭಂಡಾರಿ
ಲೇಖಕ ಅನೂಪ್ ಭಂಡಾರಿ
ಪಾತ್ರವರ್ಗ ನಿರೂಪ್ ಭಂಡಾರಿ, ರಾಧಿಕ ಚೆತನ್, ಅವಂತಿಕ ಶೆಟ್ಟಿ, ಸಾಯಿಕುಮಾರ್
ಸಂಗೀತ ಅನೂಪ್ ಭಂಡಾರಿ/ಹಿನ್ನೆಲೆ:ಬಿ.ಅಜನೀಶ್ ಲೋಕ್ನಾಥ್
ಛಾಯಾಗ್ರಹಣ ಲಾನ್ಸ್ ಕಪ್ಲನ್, ವಿಲ್ಲಿಯಮ್ ಡೇವಿಡ್
ಬಿಡುಗಡೆಯಾಗಿದ್ದು ೩ ಜುಲೈ ೨೦೧೫
ಅವಧಿ ೧೪೯ ನಿಮಿಶಗಳು
ದೇಶ ಭಾರತ
ಭಾಷೆ ಕನ್ನಡ
ಬಂಡವಾಳ ೧.೫ ಕೋಟಿ


ಕಥಾಹಂದರ

ಆಕರ್ಷಕ ವ್ಯಕ್ತಿತ್ವದ ಹಸನ್ಮುಖಿ ನಾಯಕ ಗೌತಮ್ ಸುವರ್ಣ, ಕಾದಂಬರಿಕಾರ. ಆತನಿಗೊಂದು ನಿಗೂಡ ಹಿನ್ನೆಲೆ ಇರುತ್ತದೆ. ಆತನ ಹೊಸ ಕಾದಂಬರಿ 'ರಂಗಿತರಂಗ'. ಈ ಪದ ಅವನ ನಿಗೂಡ ಹಿನ್ನೆಲೆಗಿರುವ ಕೀಲಿ ಕೈಯೂ ಹೌದು. ಅವನು ಊಟಿಯಲ್ಲಿ ಜನರಿಂದ ದೂರ ವಾಸಿಸುತ್ತಿರುವನು. ಮೃದು ಸ್ವಭಾವದ ಇಂದು, ಭೀತಿಯಲ್ಲಿ ದಿನ ಕಳೆಯುತ್ತಿರುವ ಓರ್ವ ಪೈಂಟರ್. ಕುಂಚ ಕೈಯಲ್ಲಿದ್ದರೆ ಪ್ರಪಂಚವನ್ನೇ ಮರೆತು ಬಿಡುತ್ತಾಳೆ.ಸಂಧ್ಯಾ ಓರ್ವ ಉತ್ಸಾಹೀ ಪತ್ರಕರ್ತೆ. "ಅನಷ್ಕು" ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆಯತ್ತಿರುವ ಅನಾಮಧೆಯ ವ್ಯಕ್ಥಿಯ ಬೆನ್ನು ಹತ್ತಿ ಊರಿಂದೂರು ಅಲೆಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದ ಗೌತಮ್ ಕಮರೊಟ್ಟು ಗ್ರಾಮದಲ್ಲಿರುವ ಇಂದುವಿನ ಪೂರ್ವಜರ ಮನೆಗೆ ಹೋಗಬೇಕಾಗಿ ಬರುವುದು. ಗೌತಮ್ ನ ಆಗಮನ ಕಾಳಿಂಗ ಮತ್ತು ಶಂಕರ ಮೇಸ್ಟ್ರಿಗೆ ಹಿತವೆನಿಸಿದರೂ ಕೆಲವು ಪ್ರಭಾವೀ ವ್ಯಕ್ತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಒಮ್ಮಿಂದೊಮ್ಮೆಗೆ ಇವರಿಗೆ ಹಲವಾರು ವಿಚಿತ್ರ ಘಟನೆಗಳು ಎದುರಾಗುವವು. ತಲ್ಲಣಗೊಂಡ ಗೌತಮ್ ಈ ಅನಿರೀಕ್ಷಿತ ಘಟನೆಗಳಿಗೆ ಕಾರಣ ಹುಡುಕಲು ಹೊರಟಾಗ ಸಮಸ್ಯೆಯ ಸರಮಾಲೆಯನ್ನೇ ಎದುರಿಸ ಬೇಕಾಗುವುದು. ಅದೇ ಹೊತ್ತಿಗೆ ಅನಷ್ಕುವಿನ ಹುಡುಕಾಟದಲ್ಲಿ ಸಂಧ್ಯಾ ಕಮರೊಟ್ಟು ತಲುಪುವಳು. ಆಗ ಅಲ್ಲೊಂದು ಭಯಾನಕ ಅನಾಹುತ ಸಂಭವಿಸುವುದು!!!


ಪಾತ್ರಗಳು

ಪಾತ್ರ ಕಲಾವಿದರು
ಗೌತಮ್/ಸಿಧ್ಧಾರ್ತ್ ನಿರೂಪ್ ಭಂಡಾರಿ
ತೆಂಕಬೈಲ್ ಕಾಳಿಂಗ ಭಟ್ಟ ಸಾಯಿಕುಮಾರ್
ಇಂಧು ಸುವರ್ಣ/ಹರಿಣಿ ರಾಧಿಕ ಚೆತನ್
ಸಂಧ್ಯಾ ಅವಂತಿಕ ಶೆಟ್ಟಿ
ಶಂಕರ್ ಮಾಸ್ಟರ್ ಅನಂತ್ ವೇಲು
ಬಸವರಾಜ ಹಾದಿಮನಿ ಅರವಿಂದ್ ರಾವ್
ನಿಲೇಶ್ ಗೌಡ (ಪಾಂಡು) ಸಿದ್ದು ಮೂಲಿಮನಿ
ಪಂಚಮಿ (ಪಾಂಚಾಲಿ) ರೋಶಿನಿ ಕೋರೆ
ಚೆತನ್ ರಾಜ್ ಗರ್ನಾಲ್ ಬಾಬು
ರಫೀಕ್ ಕಾರ್ತಿಕ್ ರಾವ್
*ಗೌತಮ್ ಸುವರ್ಣಾ ಅನೂಪ್ ಭಂಡಾರಿ  



No comments:

Post a Comment